ನಮ್ಮ ಮಕ್ಕಳನ್ನು ತಿದ್ದುವುದು ಹೇಗೆ?
12 hours 38 minutes ago - ಬರಹಗಾರರ ಬಳಗಸುದ್ದಿ ಬೆಚ್ಚಿಬೀಳಿಸುವಂತಿತ್ತು. ಸ್ಕೂಟರ್ ಪಿಕ್ ಅಪ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಇಬ್ಬರು ಹದಿಹರೆಯದ ಬಾಲಕರು ರಕ್ತದ ಮಡುವಿನಲ್ಲಿ ಹೊರಳಾಡಿ ಕ್ಷಣ ಮಾತ್ರದಲ್ಲಿ ಪ್ರಾಣಬಿಟ್ಟಿದ್ದರು. ಇಬ್ಬರೂ ದ್ವಿತೀಯ ಪಿಯು ವಿದ್ಯಾರ್ಥಿಗಳು. ಸ್ನೇಹಿತರಾಗಿದ್ದ ಅವರಿಬ್ಬರು ಅನಗತ್ಯ ವೇಗಕ್ಕೆ ಬಲಿಯಾಗಿದ್ದರು. ಓದುತ್ತಿದ್ದಂತೆ ರವಿಯ ಕಣ್ಣುಗಳು ತೇವಗೊಂಡವು. ತಮ್ಮ ಮಕ್ಕಳ ಬಗ್ಗೆ ನೂರಾರು ಕನಸುಗಳನ್ನು ಹೊತ್ತ ತಂದೆ ತಾಯಿಯರ ಪರಿಸ್ಥಿತಿ ಆತನ ಕಣ್ಣ ಮುಂದೆ ತೇಲಿ ಬಂತು. ಮಕ್ಕಳಿಗೆ ಸ್ಕೂಟರ್ ಕೊಡೋದು ತಪ್ಪಲ್ವಾ? ಎಂದು ಯೋಚಿಸುತ್ತಿದ್ದಂತೆ ಮನೆಯ ಶೆಡ್ ನಲ್ಲಿದ್ದ ಸ್ಕೂಟರ್ ಶಬ್ಧವಾಯಿತು. ಅಪ್ಪನ ಮಾತನ್ನು ಲೆಕ್ಕಿಸದೆ ರವಿಯ ಮಗ ಅವಿನಾಶ್ ಸ್ಕೂಟರ್ ನಲ್ಲಿ ಅದೆಲ್ಲಿಗೋ ವೇಗವಾಗಿ ಹೋಗಿ ಬಿಟ್ಟ. ಅವನಿನ್ನೂ ಪ್ರಥಮ ಪಿಯು ವಿದ್ಯಾರ್ಥಿ. ರವಿಯ ಏಕಮಾತ್ರ ಪುತ್ರ. ಸ್ಕೂಟರ್ ನಲ್ಲಿ ಹೋಗಬೇಡವೆಂದು ಅದೆಷ್ಟೋ ಬಾರಿ ಹೇಳಿದ್ದರೂ ಕೇಳುವ ಸ್ಥಿತಿಯಲ್ಲಿ ಮಗನಿಲ್ಲ.
ಸುಷ್ಮಾ ಕೋಣೆಯೊಳಗಡೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮೊಬೈಲ್ ನಲ್ಲಿ ವಿಪರೀತ ಮುಳುಗಿ ಹೋಗುತ್ತಿದ್ದ ಮಗಳಿಗೆ ಅಮ್ಮ ಅಂದು ಬುದ್ದಿ ಹೇಳಿದ್ದಳು. ಅದರಿಂದ ವಿಪರೀತ ಸಿಟ್ಟುಗೊಂಡ ಮಗಳು ತನ್ನ ಕೋಣೆಯ ಬಾಗಿಲು ಹಾಕಿ, ನೇಣು ಬಿಗಿದುಕೊಂಡಿದ್ದಳು. ತನಗಿದ್ದ ಏಕೈಕ ಮಗಳನ್ನು ಕಳೆದುಕೊಂಡ ಅಮ್ಮನ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ತಡರಾತ್ರಿ ಈ ಸುದ್ದಿ ಓದಿದ ರಮ್ಯ ಸಂಪೂರ್ಣ ವಿಚಲಿತಲಾಗಿದ್ದಳು. ಮಕ್ಕಳ ಕೈಗೆ ಮೊಬೈಲ್ ಕೊಡೋದು ತಪ್ಪಲ್ವಾ? ಎಂದು ಯೋಚಿಸುತ್ತಾ ಆಕೆ ತನ್ನ ಮಗಳ ಕೋಣೆಯತ್ತ ಬಂದು ಇಣುಕಿ ನೋಡಿದಳು. ಮಗಳು ಇನ್ನೂ ನಿದ್ದೆ ಮಾಡದೆ ಮೊಬೈಲ್ ನಲ್ಲೇ ಮುಳುಗಿದ್ದಳು. ಹೊತ್ತು ಹನ್ನೆರಡು ಮೀರಿದ್ದರೂ ಮಗಳನ್ನು ಎಚ್ಚರಿ… ಮುಂದೆ ಓದಿ...