ಎಸ್ ಎಸ್ ಎಲ್ ಸಿ ಫಲಿತಾಂಶ ; ಒಂದು ವಿಮರ್ಶೆ
1 day 1 hour ago - ಬರಹಗಾರರ ಬಳಗ2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಸಾರ್ವತ್ರಿಕ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದೆ. ಈ ಬಾರಿಯ ಪರೀಕ್ಷೆಗಳು ಬಹಳ ಪಾರದರ್ಶಕವಾಗಿ ಜರಗುವಂತೆ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯನಿರ್ಣಯ ಮಂಡಳಿಯು ವ್ಯಾಪಕ ಭದ್ರತೆ, ಮತ್ತು ಕಟ್ಟು ನಿಟ್ಟಿನ ಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಪರೀಕ್ಷಾ ಕೇಂದ್ರಗಳನ್ನು ವೆಬ್ ಕಾಸ್ಟ್ ಗೊಳಪಡಿಸಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಪರೀಕ್ಷಾ ಅವ್ಯವಹಾರಗಳು ಮತ್ತು ನಕಲು ತಡೆಗೆ ಕ್ರಮ ಜರಗಿಸಲಾಗಿದೆ ಎಂದು ಓದಿದ್ದೆ ಮತ್ತು ಆಲಿಸಿದ್ದೆ. ಫಲಿತಾಂಶಗಳು ಪ್ರಕಟವಾದಾಗ ಶೇಕಡಾ ಉತ್ತೀರ್ಣತೆ ಶೇಕಡಾ ಹತ್ತರಷ್ಟು ಇಳಿಕೆಯಾಗಿರುವುದು ಕಂಡು ಬಂತು. ಶೇಕಡಾ ಇಪ್ಪತ್ತು ಅಂಕಗಳನ್ನು ಸೇರಿಸಿಯೂ ಫಲಿತಾಂಶದಲ್ಲಿ ಇಳಿಕೆಯೆಂದರೆ ನೈಜ ಫಲಿತಾಂಶದ ಚಿತ್ರಣ ಹೇಗಿರಬಹುದು ಎಂಬ ಸಂದೇಹ. ಶೈಕ್ಷಣಿಕವಾಗಿ ಸಾಧನೆ ಮಾಡುವ ಪ್ರದೇಶಗಳಿಗೆ ಫಲಿತಾಂಶವು ಸ್ವಲ್ಪ ಮಟ್ಟಿನ ನಿರಾಳತೆಯನ್ನೂ ತಂದೊದಗಿಸಿದಂತೆ ಕಾಣಿಸಿತು. ಪರೀಕ್ಷಾ ಮಂಡಳಿಯ ಮಹೋನ್ನತ ಹೆಜ್ಜೆಯಿಂದಾಗಿ ಸಹಸ್ರಾರು ಶಿಕ್ಷಕರು ಸಮಾಧಾನದ ನಿಟ್ಟುಸಿರು ಬಿಡಲು ಸಾಧ್ಯವಾಯಿತು. ಇಂತಹ ಸುಧಾರಿತ ಪ್ರಶಂಸನೀಯವಾದ ಹೆಜ್ಜೆಗಳು ನಿರಂತರ ಅಪೇಕ್ಷಣೀಯ.
ಅವ್ಯವಹಾರಗಳಿಗೆ ಅರೆಯಲಾದ ಮದ್ದಿನ ಪರಿಣಾಮ ಫಲಿತಾಂಶದಲ್ಲಿ ಗೋಚರಿಸಿತು. ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳು ಫಲಿತಾಂಶದ ಪ್ರಮಾಣದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದರೆ ಹೆಚ್ಚಾಗಿ ಮುಂದಿರುತ್ತಿದ್ದ ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳು ಹಿಂದುಳಿದುದು ವಿಶೇಷ. ಫಲಿತಾಂಶದಲ್ಲಿ ಬಾಲಕರ ಕೊಡುಗೆ 65.9% ಮತ್ತು ಬಾಲಕಿಯರ ಕೊಡುಗೆ 81.11% ಎಂಬುದು ಬಾಲಕರ ಸಿದ್ಧತೆಯು ಕಳಪೆಯಾಗುತ್ತಿರುರುವುದನ್ನು ಬಿಂಬಿಸುತ್ತದೆ. ಬಾಲಕರಿಗೂ ಸಾಧನೆ ಮಾಡುವ ತಾಕತ್ತಿದೆ. ಆದರೂ ಅವರು ಮ… ಮುಂದೆ ಓದಿ...